ಬಂಟ್ವಾಳ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇದೇ 25ರಂದು ನಡೆಯಲಿರುವ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಸ್ಥಳೀಯ ಸಿದ್ಧಕಟ್ಟೆ, ಸಂಗಬೆಟ್ಟು, ಕರ್ಪೆ ಮತ್ತಿತರ ಕಡೆಗಳಿಂದ ಶುಕ್ರವಾರ ಹೊರೆಕಾಣಿಕೆ ಮೆರವಣಿಗೆ ಮೂಲಕ ಅಕ್ಕಿ ಮತ್ತು ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಗ್ರಾಮಸ್ಥರು ಸಮರ್ಪಿಸಿದರು. ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಪ್ರಮುಖರಾದ ಬಿ.ತಮ್ಮಯ್ಯ, ಪ್ರಭಾಕರ ಪ್ರಭು, ಅರ್ಕಕೀರ್ತಿ ಇಂದ್ರ, ಡಾ.ಸುದೀಪ್ ಕುಮಾರ್ ಜೈನ್, ರಮಾನಂದ, ಮೈಕೆಲ್ ಡಿಕೋಸ್ತ ಮತ್ತಿತರರು ಇದ್ದರು.

