ಉಡುಪಿ:ನಮ್ಮ ದೇಶದಲ್ಲಿ ಯುವ ಜನಾಂಗ ದೊಡ್ಡ ಸಂಪತ್ತಾಗಿದೆ ಇದರ ಸರಿಯಾದ ಬಳಕೆ ಯಾಗಬೇಕು ಈ ನಿಟ್ಟಿನಲ್ಲಿ ಯುವಕರಿಗೆ ಮಾಹಿತಿ ಮಾರ್ಗದರ್ಶನ ಮಾಡಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.

ಅವರು ಅರ್.ಎಸ್.ಬಿ ಸಂಘ ಇದರ ಮಹಿಳಾ ವೇದಿಕೆಯ ವತಿಯಿಂದ ಅರ್.ಎಸ್.ಬಿ ಸಭಾ ಭವನ ಮಣಿಪಾಲದಲ್ಲಿ ಇತ್ತಿಚೆಗೆ ನಡೆದ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿರದೆ ಮಕ್ಕಳನೇ ಆಸ್ತಿಯನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅದ್ಯಕ್ಷೆ ರತ್ನಾವತಿ ನಾಯಕ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರವೀಣ್ ಪ್ರಭು,ವೇದಿಕೆಯ ಪ್ರಮುಖರು ಹಾಜರಿದ್ದರು.
