ಬಂಟ್ವಾಳ: ಕರಾವಳಿ ಕರ್ನಾಟಕ ಜನಪದ ಕ್ರೀಡೆ ಕಂಬಳ ಉಳಿಸಲು ಮೂಡಬಿದಿರೆಯಲ್ಲಿ ಜರಗುವ ಪ್ರತಿಭಟನಾ /ವಿಜಯೋತ್ಸವಕ್ಕೆ ಕೃಷಿಯ ಒಂದು ಭಾಗವಾಗಿ ರೈತರು ಆಚರಿಸುತ್ತಿರುವ ಕಂಬಳಕ್ಕೆ ನ್ಯಾಯಾಲಯ ಮತ್ತು ಸರಕಾರ ಮಾನ್ಯತೆ ನೀಡುವಂತೆ ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ತನ್ಮೂಲಕ ಒತ್ತಾಯಿಸಿ ಈ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸುತ್ತಿದೆ. ಈ ಭಾಗದ ಎಲ್ಲಾ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿ ಸಹಕರಿಸಬೇಕೆಂದು ಕೋರಲಾಗಿದೆ.
ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್,ಕಾರ್ಯದರ್ಶಿ ಎನ್.ಕೆ.ಇದಿನಬ್ಬ,ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್,ಕಾರ್ಯದರ್ಶಿ ಸುದೇಶ ಮಯ್ಯ ಅವರು ತಿಳಿಸಿದ್ದಾರೆ.

