ಮೂಡುಬಿದಿರೆ: ಸ್ವರಾಜ್ಯ ಮೈದಾನದ ಬಳಿಯ ಮಣಿಕಂಠ ಕ್ಷೇತ್ರದಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ 40ನೇ ವರ್ಷದ ಅಯ್ಯಪ್ಪ ದೀಪಾರಾಧನೆಯಂಗವಾಗಿ ರವಿವಾರ ಅಯ್ಯಪ್ಪ ವಿಗ್ರಹಕ್ಕೆ ವಿಶೇಷ ಅಭಿಷೇಕ ನೆರವೇರಿತು. ಮುಖ್ಯ ಅರ್ಚಕ ರಮೇಶ ಶಾಂತಿ, ಸುದರ್ಶನ ಎಂ., ಶಿವಾನಂದ ಶಾಂತಿ ಹಾಗೂ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

