ಬಂಟ್ವಾಳ: ನೇತ್ರಾವತಿ ಬಳಗ ಮಂಜಲ್ಪಾದೆ,ಸಜೀಪ ಮುನ್ನೂರು ಇದರ ಆಶ್ರಯದಲ್ಲಿ ಜನವರಿ.17,2017ರಂದು ಸಜೀಪ ಮುನ್ನೂರು ಕೇಕುನ್ನಾರಬೆಟ್ಟ(ಮಂಜಲ್ಪಾದೆ)ಯಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸಂತೋಷ್ ಕುಮಾರ್ ಶೆಟ್ಟಿ ಮುಂಬೈ, ಎಂ.ಸುಬ್ರಹ್ಮಣ್ಯ ಭಟ್, ಯಶವಂತ ದೇರಾಜೆ, ವಾಸು ಗಟ್ಟಿ, ಸುರೇಶ ದೇರಾಜೆ, ಗಣೇಶ, ಪ್ರಶಾಂತ, ರಮೇಶ, ನರೇಂದ್ರ ಆಳ್ವ, ವಿಶ್ವಾನಾತ ಕೊಟ್ಟಾರಿ, ಕೇಶವ ಗಟ್ಟಿ, ಯೋಗೀಶ್ ಕೂಡೂರು, ಕುಶೇಷ ಉಪಸ್ಥಿತರಿದ್ದರು.

