ಮಂಗಳೂರು: 500/1000 ರೂ.ನಿಷೇಧ ಹಿನ್ನಲೆಯಲ್ಲಿ ಮೋದಿ ವಿರುದ್ಧ ಪ್ರತಿಭಟನೆಯನ್ನು ಮಾಡುವುದಾಗಿ ನ.28ರಂದು ಆಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಯಾವುದೇ ಬಂದ್ ಕರೆಗೆ ಪ್ರೋತ್ಸಾಹಿಸದೆ ಮೋದಿಗೆ ಪ್ರೋತ್ಸಾಹ ಕೊಟ್ಟು ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಸ್ವೀಟ್ ಹಂಚುವ ಮೂಲಕ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಸಂಭ್ರಮ ಪಟ್ಟರು.







