ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು ಸಹನಟರು ವಿಧಿವಶರಾದಂತಹ ಘಟನೆ ನ.7ರಂದು ಸಂಭವಿಸಿತ್ತು. 48 ಗಂಟೆಗಳ ಕಾರ್ಯಾಚರಣೆ ಬಳಿಕ ತಿಪ್ಪೆಗೊಂಡನಹಳ್ಳಿ ಡ್ಯಾಂ ನಲ್ಲಿ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿದ್ದ ಒಂದು ಶವ ಪತ್ತೆಯಾಗಿದೆ. ಅದನ್ನು ಉದಯ್ ಶವವೆಂದು ಗುರುತಿಸಲಾಗಿದೆ. ಉದಯ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಯುತ್ತಿದೆ.

