ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಹಾಸುಕಲ್ಲು ಅಳವಡಿಸುವ ಕಾಮಗಾರಿಗೆ, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ವಿಟ್ಲ ಮಂಡಲ ವ್ಯಾಪ್ತಿಯ ಘಟ ಸಮಿತಿಯ ವಿಕಾಸ ವಾಹಿನಿ ಸ್ವ-ಸಹಾಯ ಸಂಘದ ಸದಸ್ಯರಿಂದ ಶ್ರಮಸೇವೆ ನಡೆಯಿತು.
ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ, ಗ್ರಾಮ ಸಂಯೋಜಕಿ ಲೀಲಾ, ವಿಟ್ಲ ಮಂಡಲದ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ, ಕಾರ್ಯದರ್ಶಿ ಸುನಿಲ್ ವಿಟ್ಲ, ಉಪಾಧ್ಯಕ್ಷೆ ಉಮಾವತಿ ಒಡಿಯೂರು, ಸಂಘಟನಾ ಕಾರ್ಯದರ್ಶಿ ಶೇಖರ್ ಮಲಾರ್, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ, ಪಟ್ಲ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಪಟ್ಲ, ವಿಟ್ಲ ಪಡ್ನೂರು ಘಟ ಸಮಿತಿ ಅಧ್ಯಕ್ಷ ಹೇಮಾನಂದ ಶೆಟ್ಟಿ, ವಿಟ್ಲ ಕಸ್ಬಾ ಘಟ ಸಮಿತಿ ಉಪಾಧ್ಯಕ್ಷೆ ವಿಮಲ ಆಚಾರ್ಯ, ಪೆರುವಾಯಿ ಘಟ ಸಮಿತಿ ಅಧ್ಯಕ್ಷೆ ರೇವತಿ ಕಡಂಬಿಲ, ಕನ್ಯಾನ ಘಟ ಸಮಿತಿಯ ಅಣ್ಣು ನಾಯ್ಕ ಕೊಣಲೆ, ದಾಮೋಧರ ಪರಕ್ಕಜೆ, ಸೇವಾದೀಕ್ಷಿತರಾದ ಡೀಲಾಕ್ಷ, ಪುಷ್ಪಾ, ಸುಲೊಚನಾ, ಗೀತಾ, ಸುನೀತಾ, ವಿಠಲ ಅಚಾರ್ಯ ಹಾಗೂ ಘಟ ಸಮಿತಿಯ ಸದಸ್ಯರು ಭಾಗವಹಿಸಿದ್ದರು.


