ವಿಟ್ಲ: ವಿಟ್ಲ ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ 20ನೇ ವರ್ಷದ ವಿಶ್ವಕರ್ಮ ಪೂಜೆಯು ಮಂಗಳೂರಿನ ಪುರೋಹಿತ್ ಶ್ರೀ ಸತೀಶ್ ಆಚಾರ್ಯ ಗುರುಮಠ ಇವರ ನೇತೃತ್ವದಲ್ಲಿ ವಿಟ್ಲ ಹನುಮಗಿರಿಯ ಶ್ರೀರಾಮ ಮಂದಿರದ ಪಲಿಮಾರು ವಿಠಲ್ ಪೈ ಸ್ಮಾರಕ ಸಭಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಂಗಳೂರು ಎ. ಜೆ. ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ| ಮನೋಹರ ಆಚಾರ್ಯ, ಮಂಗಳೂರು ಎನ್. ಸಿ .ಎಫ್ ನಿವೃತ್ತ ಮೇನೇಜ್ಮೆಂಟ್ ಆಫೀಸರ್ ಧನಂಜಯ ಆಚಾರ್ಯ, ಪುತ್ತೂರು ವಲಯದ ವಿಟ್ಲ ಶಾಖೆಯ ಉಪರಣ್ಯ ಅಧಿಕಾರಿ ಲೋಕೇಶ್ ಎಸ್. ಎನ್, ಸಂಘದ ಗೌರವಾಧ್ಯಕ್ಷ ಕೆ ಪುತ್ರಾಯ ಆಚಾರ್ಯ, ಅಧ್ಯಕ್ಷ ಕೆ. ಸದಾಶಿವ ಆಚಾರ್ಯ ಕೈಂತಿಲ, ಕಾರ್ಯದರ್ಶಿ ಪ್ರದೀಪ ಕೆ., ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ಎನ್., ಕೋಶಾಧಿಕಾರಿ ಪುರಂದರ ಆಚಾರ್ಯ ಎನ್, ಜತೆಕಾರ್ಯದರ್ಶಿ ಎನ್. ಸತೀಶ್ ಆಚಾರ್ಯ ಹಾಗೂ ಇತರರು ಭಾಗವಹಿಸಿದ್ದರು.

