ವಿಟ್ಲ: ಸೈಟ್ ರೀಟಾ ಶಾಲೆಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರೀಟಾ ಶಾಲೆ ಮತ್ತು ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಭ್ರಷ್ಠಾಚಾರ ಮುಕ್ತ ಸಮಾಜಕ್ಕಾಗಿ ಎಂಬ ಧ್ಯೇಯವಾಕ್ಯದೊಂದಿಗೆ `ಮಾನವ ಸರಪಳಿ’ ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸಪ್ತಾಹದ ಅಂಗವಾಗಿ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ರೀಟಾ ಶಾಲೆಯ ಜತೆ ಕಾರ್ಯದರ್ಶಿ ವಿಟ್ಲ ಚರ್ಚ್ನ ಧರ್ಮಗುರುಗಳಾದ ಎರಿಕ್ ಕ್ರಾಸ್ತಾ ಚಾಲನೆ ನೀಡಿ ಶುಭಹಾರೈಸಿದರು. ಜೇಸಿಐ ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ರಾಜಶೇಖರ್, ಅಣ್ಣಪ್ಪ ಸಾಸ್ತಾನ, ರೀಟಾ ಶಾಲೆಯ ಮುಖ್ಯ ಶಿಕ್ಷಕ ಸಚಿನ್ ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು.
