ವಿಟ್ಲ: ಜೇಸಿಐ ಸಪ್ತಾಹ 2016 ಇದರ ಅಂಗವಾಗಿ ಜೇಸಿಐ ವತಿಯಿಂದ ಮಂಗಳೂರಿನ ಫಾ|| ಮುಲ್ಲರ್ಸ್ ಮೆಡಿಕಲ್ ಲ್ಯಾಬರೋಟರಿ ಇದರ ಸಹಯೋಗದೊಂದಿಗೆ ಪುಣಚ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ದಿ| ಡಾ| ರವಿರಾಜ್ ಬರೆ ಇವರ ಸ್ಮರಣಾರ್ಥ `ರಕ್ತದಾನ ಶಿಬಿರ’ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಮಂಗಳೂರಿನ ಫಾ|| ಮುಲ್ಲರ್ಸ್ ಆಸ್ಪತ್ರೆಯ ಬ್ಲಡ್ಬ್ಯಾಂಕ್ ನ ನಿರ್ದೇಶಕ ಡಾ| ಕಿರಣಾ ಪೈಲೂರು ಉದ್ಘಾಟಿಸಿದರು. ಮುಖ್ಯ ಅತಿಥಿಳಾಗಿ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಮತ್ತು ವಲಯ 15ರ ಉಪಾಧ್ಯಕ್ಷ ರಕ್ಷಿತ್ ಕುಡುಪು ಭಾಗವಹಿಸಿದ್ದರು.

ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ. ವಿ. ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ನಿಕಟ ಪೂರ್ವ ಅಧ್ಯಕ್ಷ ಮೋಹನ ಮೈರ ನಿರೂಪಿಸಿದರು.

