ಸುದ್ದಿ9 ಕೈಕಂಬ:ಗಂಜಿಮಠ ಗಣೇಶ್ ನಗರದ ಕುಡುವಿ ಜನಾಂಗದವರು ಬಸವ ವಸತಿ ಯೋಜನೆಗೆ ಹಾಗೂ ಅಕ್ರಮ ಸಕ್ರಮಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಐದಿನ್ ಬಾವ ಅವರಿಗೆ ಮನವಿ ಸಲ್ಲಿಸಿದರು . ಈ ಸಂದರ್ಭದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲೀಕ್ ಕಾಮತ್ ಉಪಾಧ್ಯಕ್ಷೆ ಮಾಲತಿ, ಮಾಜಿ ಉಪಾಧ್ಯಕ್ಷರಾದ ಜಿ. ಸುನೀಲ್ ಗಂಜಿಮಠ ಮತ್ತಿತರರು ಉಪಸ್ಥಿತರಿದ್ದರು.
