ಪುತ್ತೂರು: ಇತ್ತೀಚಿಗೆ ಪುತ್ತೂರಿನಲ್ಲಿ ನಡೆದ ಜೇಸಿಐ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಬಂಟ್ವಾಳ ಜೇಸಿಐಯ ಸದಸ್ಯ ಸದಾನಂದ ಬಂಗೇರ ಅವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ” ಸಾಧನಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಜೇಸಿಐನ ನಿಕಟಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಂಪತ್ ಬಿ.ಸುವರ್ಣ, ವಲಯಾಧ್ಯಕ್ಷ ಸಂದೀಪ್ ಕುಮಾರ್, ನಿಕಟಪೂರ್ವವಲಯಾಧ್ಯಕ್ಷ ಕೃಷ್ಣ ಮೋಹನ್, ಜೆಜೆಸಿ ಸಂಯೋಜಕ ರಾಧಕೃಷ್ಣ ಬಂಟ್ವಾಳ್, ಜೇಸಿಐ ಬಂಟ್ವಾಳದ ಅಧ್ಯಕ್ಷ ಸಂತೋಷ್ಜೈನ್, ಕಾರ್ಯದರ್ಶಿ ಡಾ.ಬಾಲಕೃಷ್ಣ, ಸದಸ್ಯ ರಾಜೇಶ್ ಭಂಡಾರಿಬೆಟ್ಟು ಮತ್ತಿತರರು ಹಾಜರಿದ್ದರು.
