ಮೂಡುಬಿದಿರೆ: ಕೊಡಂಗಲ್ಲು ಫ್ರೆಂಡ್ಸ್ ಸರ್ಕಲ್, ಟೀಮ್ ಬೆದ್ರ ಯುನೈಟೆಡ್, ಜ್ಯೂನಿಯರ್ ಜೇಸಿಐ ಜಂಟಿ ಆಶ್ರಯದಲ್ಲಿ ಕೊಡಂಗಲ್ಲು ಪರಿಸರದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಅರಣ್ಯ ಇಲಾಖೆಯ ಅಧಿಕಾರಿ ಅನಿಲ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ರಶ್ಮಿತಾ ಯುವರಾಜ್ ಜೈನ್, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಟೀಮ್ ಯುನೈಡೆಟ್ನ ಪ್ರಮುಖರಾದ ಪಾವನ್ ಭಟ್, ಜ್ಯೂನಿಯರ್ ಜೇಸಿಐ ಅಧ್ಯಕ್ಷ ಅಕ್ಷಯ್ದೀಪ್, ಆಕಾಶ್ ನಾಟೇಕರ್, ಉದ್ಯಮಿ ಮಹಮ್ಮದಾಲಿ ಅಬ್ಬಾಸ್, ಹರಿಶ್ಚಂದ್ರ ಭಟ್, ದಾಮೋದರ್, ಜಗದೀಶ್ ಮೊದಲಾದವರಿದ್ದರು.

