ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವ ನಾಯಕ ಕಲ್ಲಡ್ಕ ಮಡ್ಲಮಜಲು ವಜ್ರನಾಥ ಪಿ. ಆವರು ಆಯ್ಕೆಯಾಗಿರುತ್ತಾರೆ. ಇವರು ಅನೇಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಪಕ್ಷದಲ್ಲಿ ಸುಮಾರು 20 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ವಾರ್ಡು ಸಮಿತಿಯ ಅಧ್ಯಕ್ಷನಾಗಿ , ಗೋಳ್ತಮಜಲು ಪಂಚಾಯತ್ ಸಮಿತಿಯ ಅಧ್ಯಕ್ಷನಾಗಿ, ಕಲ್ಲಡ್ಕ ಶಾರದ ಪೂಜಾ ಉತ್ಸವ ಸಮಿತಿಯ ಉಪಾಧ್ಯಕ್ಷನಾಗಿ, ಶ್ರೀ ಗುರೂಜಿ ಸೇವಾ ಸಂಘದ ಸಕ್ರೀಯ ಸದಸ್ಯನಾಗಿರುತ್ತಾರೆ.

ಇದೀಗ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಪದವಿಯನ್ನು ಅರ್ಹವಾಗಿಯೇ ಪಡೆದಿರುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷವನ್ನು ಸಂಘನಾತ್ಮಕವಾಗಿ ಬೆಳೆಸುವ ಯುವ ನಾಯಕ. ಬಂಟ್ವಾಳ ಕ್ಷೇತ್ರದಲಿ ಪಕ್ಷಕ್ಕಾಗಿ ದುಡಿಯುವ ಯುವ ಪಡೆಯನ್ನು ಕಟ್ಟುವ ಕನಸನ್ನು ಹೊಂದಿದ್ದಾರೆ.
