ಕಡಂದಲೆ ಪಲ್ಕೆಯಲ್ಲಿ ಖಾಸಗಿ ಬಸ್ಸು ಹಾಗು ಪಿಕ್ಕಪ್ಪುವ್ಯಾನೊಂದುಡಿಕ್ಕಿಯಾದಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಳ್ಮಣ್ ನಿಂದ ಮೂಡಬಿದ್ರೆಗೆ ತೆರಳುತಿದ್ದ ಬಸ್ಸಿಗೆ ಮೂಡಬಿದ್ರೆಕಡೆಯಿಂದ ಬರುತ್ತಿದ್ದ ಪಿಕ್ಕಪ್ಪು ವ್ಯಾನ್ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಶಾಲಾ ಮಕ್ಕಳು ಹಾಗು ಪ್ರಯಾಣಿಕರುತುಂಬಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಮುಖಾ ಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಿ ರಸ್ತೆ ಪಕ್ಕದ ಮಣ್ಣಿನಗೋಡೆಗೆ ಹೋಗಿ ಗುದ್ದಿದೆ, ಇದರಿಂದ ಹೆಚ್ಚಿನಅನಾಹುತ ಸಂಭವಿಸದೆಎರಡು ವಾಹ£ದÀಚಾಲಕರು ಹಾಗು ಬಸ್ಸಿನ ಪ್ರಯಾಣಿಕರುಗಾಯವಿಲ್ಲದೆ ಪ್ರಾಣಪಾಯದಿಂದ ಪಾರಾಗಿದ್ದಾರೆ .

ಅಪಘಾತಕ್ಕೆಎಡೆ ಮಾಡಿಕೊಡುತ್ತಿರುವ ವಿದ್ಯುತ್ತು ಕಂಬ:ಅಪಘಾತ ನಡೆದ ಸ್ಥಳದಲ್ಲಿ ವಿದ್ಯುತ್ತು ಕಂಬವೊಂದು ವಾಹನ ಚಾಲಕರಿಗೆತುಂಬ ಅಪಾಯಕಾರಿಯಾಗಿದೆ. ಇಕ್ಕಟ್ಟಾದರಸ್ತೆಯತಿರುವಿನಲ್ಲಿ ಈ ಕಂಬವನ್ನು ಅಳವಡಿಸಿದ್ದರಿಂದ ಇದರ ಬಗ್ಗೆ ವಾಹನ ಚಾಲಕರಿಗೆ ಹತ್ತಿರ ಬಂದಾಗಲೆಅರಿವುವಾಗುವುದು. ಇದರಿಂದಚಾಲಕರುತಬ್ಬಿಬ್ಬಾಗಿ ವಿದ್ಯುತ್ತು ಕಂಬಅಪಘಾತಕ್ಕೆಎಡೆ ಮಾಡಿಕೊಡುತ್ತಿದೆಎಂದು ನಿತ್ಯ ಸಂಚರಿಸುವ ವಾಹನ ಚಾಲಕರುದೂರುತ್ತಿದ್ದಾರೆ.ಇದನ್ನು ತೆರವುಗೊಳಿಸುವಂತೆ ಇಲಾಖೆಗೆ ಹಲವು ಬಾರಿ ತಿಳಿಸಿದೂ ಕ್ರಮಕೈಗೊಂಡಿಲ್ಲವೆಂದುಗ್ರಾಮಸ್ಥರು ಅಳಲುತೊಡಿಕೊಂಡರಿ.ಇದರ ಬಗ್ಗೆ ಇಲಾಖೆ ಕೂಡಲೆ ಸ್ಫಂದಿಸಬೇಕಾಗಿದೆ.

