ಕೈಕಂಬ: ವಳಚ್ಚಿಲ್‍ನಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಇಂದು ಮತ್ತೊಂದು ಅಪಘಾತ ನಡೆದು ಓರ್ವ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಾರಿ ನಡೆದಿರುವುದು ಆಲ್ಟೋ ಕಾರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಮಧ್ಯೆ.

IMG-20160628-WA0023

IMG-20160628-WA0030 (1)
ಮಂಗಳೂರು-ಬೆಂಗಳೂರು ಹೆದ್ದಾರಿಯಾಗಿರುವ ವಳಚ್ಚಿಲ್ ಎಂಬಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗೆ ಆಲ್ಟೋ ಕಾರ್‍ಗೆ ಗುದ್ದಿ ಈ ಅಪಘಾತ ನಡೆದಿದ್ದು, ಕಾರ್ ಡ್ರೈವರ್ ಆಗಿದ್ದ ವಸಂತ್ ಕುಮಾರ್(64) ಎನ್ನುವವರು ಮೃತಪಟ್ಟಿದ್ದಾರೆ.
ಈ ಹಿಂದೆ ಇದೇ ಪರಿಸರದಲ್ಲಿ ಬೃಹತ್ ಗಾತ್ರದ ಕಂಟೈನರ್ ಲಾರಿ ಕಾರ್ ಹಾಗೂ ರಿಕ್ಷಾಗಳಿಗೆ ಬಿದ್ದ ಪರಿಣಾಮ ಹಲವರು ಮೃತಪಟ್ಟು ಹಲವರು ಗಂಭೀರ ಗಾಯಗೊಂಡಿದ್ದರು. ದುಸ್ವಪ್ನವೆಂಬಂತೆ ಇದೇ ಜಾಗದಲ್ಲಿ ಮತ್ತೆ ಅಪಘಾತ ನಡೆದಿದೆ. ಗ್ರಾಮಾಂತರ ಹಾಗೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

By suddi9

Leave a Reply

Your email address will not be published. Required fields are marked *