ಬಂಟ್ವಾಳ:ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕ ಇದರ ಪ್ರಥಮ ಸಂಚಾಲಕರಾಗಿ ಯುವ ವಕೀಲ ರಾಜಾರಾಮ ನಾಯಕ್ ಇವರು ಆಯ್ಕೆಯಾಗಿದ್ದಾರೆ. ಸಹ ಸಂಚಾಲಕರಾಗಿ ವಿಜಯ ಸಾಲೆತ್ತೂರು, ಕಾರ್ಯದರ್ಶಿಯಾಗಿ ವಿ.ಸು.ಭಟ್, ಸಹ ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕಾಜೆ, ಸಲಹೆಗಾರರಾಗಿ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಡಾ.ಗಿರೀಶ ಭಟ್ ಅಜೆಕ್ಕಳ, ವಿಲ್ಫ್ರೆಡ್ ಪ್ರಕಾಶ ಡಿಸೋಜ ಆಯ್ಕೆಯಾಗಿದ್ದಾರೆ.

ಘಟಕ ಸದಸ್ಯರಾಗಿ ಭಾಸ್ಕರ ಅಡ್ವಾಳ, ಸುಧಾ ನಾಗೇಶ, ಗೀತಾ ಕೊಂಕೋಡಿ, ರಾಜಾರಾಮ ವರ್ಮ, ಸುನಿಲ್ ಶಂಭೂರು, ಮೋಹನ್ ಕೆ.ಶ್ರೀಯಾನ್ ರಾಯಿ, ಸಂದೀಪ್ ಸಾಲ್ಯಾನ್, ಜಯರಾಮ ಪಡ್ರೆ, ಶಿವಪ್ರಕಾಶ ಜೈನ್, ಜಿ.ಮಹಮ್ಮದ್ ಕಲ್ಲಡ್ಕ, ಚೇತನ್ ಮುಂಡಾಜೆ, ಆಶಾ ಪ್ರಸಾದ್ ರೈ, ಮಮತಾ ಕಿರಣ್, ಮಹೇಂದ್ರ ಸಾಲೆತ್ತೂರು, ಅನುಸೂಯ ಈಶ್ವರಚಂದ್ರ ಭಟ್ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
