ಮುಂಬಯಿ, ಜೂ.19: ಮುಂಬಯಿಯ ಹೆಸರಾಂತ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮಾತೃಶ್ರೀ ಶ್ರೀಮತಿ ಗಿರಿಜಾ ವಿ.ರಾವ್ ಜೋಕಟ್ಟೆ (85.) ಅವರು ಶನಿವಾರ (18.06.2016) ರಾತ್ರಿ ಮುಂಬಯಿ ಉಪನಗರದ ಬೊರಿವಲಿ ಪಶ್ಚಿಮದ ಗೊರಾಯಿಯಲ್ಲಿನ ಸ್ವಗೃಹ ಸುಯೋಗ್ನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಮೂಲತಃ ಮಂಗಳೂರಿನ ಜೋಕಟ್ಟೆಯವರಾಗಿದ್ದು, ದಿ| ಡಾ| ವೆಂಕಟರಮಣ ರಾವ್ ಇವರ ಧರ್ಮಪತ್ನಿಯಾಗಿದ್ದರು.
ಮೃತರು ಎರಡೂ ಹೆಣ್ಣು, ಎರಡೂ ಗಂಡು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಜೆರಿಮೆರಿ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಎಮ್.ಉಡುಪ ಅವರ ಸೋದರ ಅತ್ತೆಯಾಗಿದ್ದಾರೆ.

