ಮಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ಮುಂದಿನ ಐದು ವರ್ಷಗಳಿಗೆ ರಾಜಾಧ್ಯಕ್ಷರಾಗಿ ಎಂ. ಕೃಷ್ಣಮೂರ್ತಿ ಬೆಂಗಳೂರು ಇವರು ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಭಂಡಾರಿ ಹೊಸಬೆಟ್ಟು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ವಸಂತ ಎಂ. ಬೆಳ್ಳೂರು ಜಿಲ್ಲಾಪ್ರತಿನಿ, ಜೀವನ್ ಸಾಲ್ಯಾನ್ ಕೈಕಂಬ ಮಂಗಳೂರು ತಾಲೂಕು ಅಧ್ಯಕ್ಷ, ಗೋಪಾಲ ಭಂಡಾರಿ ಎಡಪದವು ತಾಲೂಕು ಪ್ರತಿನಿಧಿ, ಸುರೇಶ್ ನಂದೊಟ್ಟು ಬಂಟ್ವಾಳ ತಾಲೂಕು ಅಧ್ಯಕ್ಷ,, ಹರೀಶ್ ಸಾಲ್ಯಾನ್ ಬಿಸಿರೋಡ್ ತಾಲೂಕು ಪ್ರತಿನಿಧಿ, ಶಶಿಧರ್ ಸಾಲ್ಯಾನ್ ಮಡ್ಯಂತಾರ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ, ಎಸ್. ರವಿ ಮಡ್ಯಂತಾರ್ ತಾಲೂಕು ಪ್ರತಿನಿಧಿ, ಜಗದೀಶ್ ಭಂಡಾರಿ ನರಿಮೊಗರು ಪುತ್ತೂರು ತಾಲೂಕು ಅಧ್ಯಕ್ಷ, ರಮೇಶ್ ಭಂಡಾರಿ ಮುರ ತಾಲೂಕು ಪ್ರತಿನಿಧಿ, ವಸಂತ ಮಾರಾಜೆ ಸುಳ್ಯ ತಾಲೂಕು ಅಧ್ಯಕ್ಷ, ಜಯ ಪ್ರಕಾಶ್ ಎಂ. ತಾಲೂಕು ಪ್ರತಿನಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ವಿಶೇಷ ಭೂಸ್ವಾನಾಧಿಕಾರಿ ಎಲ್. ಭೀಮಾ ನಾಯಕ್ ಕೆ. ಎ. ಚುನಾವಣಾ ಅಧಿಕಾರಿಯಾಗಿದ್ದರು.

