ಬಜಪೆ: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಉತ್ಸವ ಎ.13ಬುಧವಾರ ಧ್ವಜಾರೋಹಣದೊಂದಿಗೆ ಸಾಂಪ್ರಾದಾಯಿಕ,ದಾರ್ಮಿಕ ವಿಧಿಪೂರ್ವಕ ಪ್ರಾರಂಭಗೊಂಡಿತು. ಇದೇ ಸಂಧರ್ಭ ಉತ್ಸವ ಬಲಿ, ಶಿಬರೂರು ಕೊಡಮಣಿತ್ತಾಯ ದೈವ ಹಾಗೂ ಶ್ರೀ ದೇವರ ಭೇಟಿಯ ಸಾಂಪ್ರಾದಾಯಿಕ ವಿಧಿ ಜರುಗಿತು.
ರಾತ್ರಿ ಉತ್ಸವ ಬಲಿ, ರಂಗಪೂಜೆ, ಚಿನ್ನದ ರಥೋತ್ಸವ ಜರುಗಿತು. ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ವಾಸುದೇವ ಅಸ್ರಣ್ಣ, ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕ ರುಗಳಾದ ಅನಂತ ಪದ್ಮನಾಭ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಆಡಳಿತಾಧಿಕಾರಿಗಳಾದ ಗೋಕುಲ್ದಾಸ್ ನಾಯಕ್ ಅವರುಗಳು ಉಪಸ್ಥಿತರಿದ್ದರು. ಸಂಜೆ ಸರಸ್ವತಿ ಸದನದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು. ದಿನವಿಡೀ ಕ್ಷೇತ್ರಕ್ಕೆ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುರುತ್ತಾರೆ.





