ಕೈಕಂಬ:ಮಂಗಳೂರು ತಾಲೂಕಿನ ಬಜಪೆ ಸುರಭೀಕಟ್ಟೆ ಕೊಳಂಬೆಯ ನಾಗಬ್ರಹ್ಮ ದೇವಸ್ಥಾನದ ನಾಗಬ್ರಹ್ಮದೇವರಿಗೆ ಫೆ.25 ರಂದು ಗುರುವಾರ ಬ್ರಹ್ಮಕಲಶಾಭಿಷೇಕ ಕುಡುಪು ಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಜಯರಾಮ ಅಸ್ರಣ್ಣ , ಡಾ. ಪ್ರಸಾದ್ ಹೆಗ್ಡೆ ನಂದಬೆಟ್ಟು, ಸಿ.ಎಸ್. ಶೆಟ್ಟಿ ಮಜಲುಗುತ್ತು, ಶ್ರೀಧರ ಆಳ್ವ ಕಂದಾವರ ಬಾಳಿಕೆ, ಯಜಮಾನ ಜಯ ಶೆಟ್ಟಿ, ಏತಮೊಗರುಗುತ್ತು, ಸುಕೇಶ್ ಮಾಣ್ಯಾ,ತಲಕಳ, ಮೊಕ್ತೇಸರರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.






















