ಮೂಡುಬಿದರೆ : ಬೆಳುವಾಯಿ ಶ್ರೀರಾಮನಗರ ನಿವಾಸಿ ಉಪೇಂದ್ರ ಆಚಾರ್ಯ (79) ಡಿ.28ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂರುಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ.
ವೃತ್ತಿಯಲ್ಲಿ ಮರದ ಕೆಲಸಗಾರರಾಗಿದ್ದ ಅವರು ಮೂಡುಬಿದರೆ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂಬಂಧಿಸಿದ ಬೆಳುವಾಯಿ ಗ್ರಾಮ ಕೂಡುವಳಿಕೆಯ ಮೊಕ್ತೇಸರರಾಗಿ ಸುಮಾರು 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
