ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪಂಚಮಿ ಷಷ್ಠಿಯ ಪ್ರಯುಕ್ತ ಬುಧವಾರ ಬೆಳ್ಳಿ ರಥೋತ್ಸವ ಹಾಗೂ ಚಿಕ್ಕ ರಥೋತ್ಸವ ದೇವರ ಉತ್ಸವ ಬಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ತಂತ್ರಿಗಳಾದ ವೆಂಕಟೇಶ್ ತಂತ್ರಿ ಸುಬ್ರಹ್ಮಣ್ಯ ತಂತ್ರಿ ದೇವಳದ ಪ್ರಧಾನ ಅರ್ಚಕ ಪವತ್ರಪಾಣಿ ಮಾಧವ ಭಟ್ ,ನಾರಾಯಣ ಭಟ್ ,ಪರಮೇಶ್ವರ ಭಟ್, ರಾಮ್ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರಶ್ಚಂದ್ರ ಮೊಕ್ತೇಸರ ಚೇರಾ ಸೂರ್ಯನಾರಾಯಣ ರಾವ್, ಅಮ್ಮುಂಜೆ ಗುತ್ತು ಶಿವಪ್ರಸಾದ್ ಶೆಟ್ಟಿ, ಉಳಿಪಾಡಿಗುತ್ತು ಮಹೇಶ್ ಚೌಟ, ಕೃಷ್ಣರಾಜ ಮಾರ್ಲ, ಆಮ್ಮುಂಜೆಗುತ್ತು ದೇವ್ದಾಸ್ ಹೆಗ್ಡೆ ,ಉದಯಕುಮಾರ್ ಆಳ್ವ, ಅಮ್ಮುಂಜೆಗುತ್ತು ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು





