ಕೈಕಂಬ: ಮೊಗರು ಗುತ್ತು ಶ್ರೀ ಧೂಮಾವತಿ, ಕೊಡಮಣಿತ್ತಾಯ ಪರಿವಾರ ದೈವಗಳ ಕ್ಷೇತ್ರವಾದ ಮೊಗರು ಗುತ್ತಿನ ಕಂಬಳ ಗದ್ದೆಯಲ್ಲಿ ಅನಾದಿ ಕಾಲದಿಂದ ನಡೆದು ಬಂದ ಸಾಂಪ್ರಾದಾಯಿಕ ಪೂಕರೆ ಕಂಬಳ ಶುಕ್ರವಾರ ನಡೆಯಿತು.
ಪೊಳಲಿ ಮಾಧವ್ ಮಯ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಹೂ-ಹಿಂಗಾರಗಳಿಂದ ಶೃಂಗರಿಸಿದ ಪೂಕರೆಯನ್ನು ಕಂಬಳ ಗದ್ದೆಯ ಮಧ್ಯದಲ್ಲಿ ನೆಡಲಾಯಿತು.

ಮೊಗರು ಗುತ್ತು ಕಂಬಳ ಮನೆಯ ರಾಜೇಂದ್ರ ಮೇಂಡ, ಸುರೇಶ್ ಶೆಟ್ಟಿ, ಮಹೇಶ್ ಶೆಟ್ಟಿ, ಗಂಗಾಧರ ರೈ, ಮನೀಶ್ ಶೆಟ್ಟಿ, ರವೀಂದ್ರ ಮೇಂಡ, ಸುರೇಂದ್ರ ಮೇಂಡ, ಗಣೇಶ್ ರೈ, ಗಣೇಶ್ ಸಾಮನಿ, ಬಾಬು ಸಾಮನಿ, ಸದಾಶಿವ ಮಣ್ಪಾ, ರಮೇಶ್ ಚೌಟ, ಕರುಣಾಕರ ಶೆಟ್ಟಿ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

