ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲನೇ ದಿನ ಮಂಗಳವಾರ ಸಂಜೆ 6ರಿಂದ ಶರತ್ ಹಳೆಯಂಗಡಿ ಮತ್ತು ಬಳಗದವರಿಂದ ಗಿಟಾರ್ ವಾದನ ನಡೆಸಿಕೊಟ್ಟರು. ಗಿಟಾರ್ ಶರತ್ ಹಳೆಯಂಗಡಿ, ತಬಲದಲ್ಲಿ ಸುರೇಶ್ ಕಡಂದಲೆ, ಕೊಳಲುವಾದನದಲ್ಲಿ ಲೋಕೇಶ್ ಸಂಪಿಗೆ, ತವಿಲ್ ಕರುಣಾಕರ ಪೊಳಲಿ ಇವರು ಗಿಟಾರ್ ವಾದನದಲ್ಲಿ ಭಾಗವಹಿಸಿದ್ದರು.


