ಬಂಟ್ವಾಳ: ತಾಲೂಕು ಪಂಚಾಯತ್ ಬಂಟ್ವಾಳ ಇದರ 2014-15ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ ಸ್ರ್ತಿಶಕ್ತಿಭವನದಲ್ಲಿ ನಡೆಯಿತು. ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ತಾ.ಪಂ.ಅದ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಾ.ಪಂ. ಸದಸ್ಯರಾದ ಮಾದವ ಮಾವೆ, ಆನಂದ ಶಂಭೂರು, ದಿನೇಶ್ ಅಮ್ಟೂರು, ಕಮಲಾಕ್ಷಿ, ಎಪ್ರೆಮ್ ಸ್ವಿಕೇರಾ, ಶರೀಪ್, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ವ್ಯವಸ್ಥಾಪಕ ಸುಂದರ, ಮಂಜುವಿಟ್ಲ ಮತ್ತು ತಾಲೂಕು ಅಧಿಕಾರಿಗಳು ಹಾಜರಿದ್ದರು.
