ಬಂಟ್ವಾಳ: ನೇತ್ರಾವತಿ ನದಿ ಉಳಿಸಿ ಅಭಿಯಾನದ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನೇತ್ರಾವತಿ ರಥಯಾತ್ರೆ 2ನೇ ದಿನದಂದು ಪುಂಜಾಲಕಟ್ಟೆಗೆ ಆಗಮಿಸಿತು.

ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ ನೇತ್ರಾವತಿ ನದಿ ತಿರುವು ಯೋಜನೆಯಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೊಳಗಾಗಲಿದ್ದು ಎಲ್ಲಾ ತುಳುವರು ಇದನ್ನು ವಿರೋಸಬೇಕು ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಿರಾಜ್ ಅಡ್ಕರೆ ರಥ ಯಾತ್ರೆಯಲ್ಲಿದ್ದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಉದ್ಯಮಿ ಪದ್ಮ ಮೂಲ್ಯಅನಿಲಡೆ, ಮಡಂತ್ಯಾರು ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಶ್ರೀ ರಾಮ ಭಜನ ಮಂದಿರ ಅಧ್ಯಕ್ಷ ಶ್ರೀನಿವಾಸ ಅತ್ತಾಜೆ, ಪ್ರಮುಖರಾದ ಎ.ಕೆ.ಸಾಲು, ಕೃಷ್ಣಪ್ಪ ಪೂಜಾರಿ, ಮಾಧವ ಹೆಗ್ಡೆ , ತು.ರ.ವೇ. ಪುಂಜಾಲಕಟ್ಟೆ ಘಟಕ ಪದಾಕಾರಿಗಳಾದ ಪ್ರಶಾಂತ್ ಜೈನ್, ಪ್ರವೀಣ ಶೆಟ್ಟಿ , ರೂಪೇಶ್, ಇರ್ವತ್ತೂರು ಘಟಕ ಅಧ್ಯಕ್ಷ ಗಣೇಶ ಶೆಟ್ಟಿ ಮತ್ತಿತರರಿದ್ದರು.
