ಮೂಡಬಿದರೆ: ಶ್ರೀ ರಾಮ ಭಜನಾ ಮಂದಿರ(ರಿ) ಎಡಪದವು ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನಾ ಸಂಕೀರ್ತಣ ಮತ್ತು ಸಂಗೀತಾಭ್ಯಾಸವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಆಕಾಶವಾಣಿ ಕಲಾವಿದರಿಂದ ಶ್ರೀಯುತ ಸಾರಂಗವಾಣಿ ನೆರವೇರಿಸಿದರು. ಮುಂದೆ ಇದರ ತರಭೇತಿಯನ್ನು ಪ್ರತೀ ಭಾನುವಾರ ಸಂಜೆ 4ರಿಂದ 5ರವೆರೆಗೆ ಮಕ್ಕಳಿಗೆ ಉಚಿತವಾಗಿ ನೀಡುವುದೆಂದು ತಿಳಿಸಲಾಯಿತು.
ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಇಂತಹ ಅನೇಕ ವಿಭಾಗ ಅನೇಕ ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ತುಂಬಾ ಅನೂಕೂಲವಾಗಲಿದೆ.ಎಂದು ಶ್ರೀಯುತ ಸಾರಂಗವಾಣಿ ಈ ಸಂಧರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ (ಅರ್ಚಕರು) ಗುರುರಾಜ್ ತಂತಿ,ಮುರಳೀದರ ಶೆಟ್ಟಿ, ಬಾಲಕೃಷ್ಣ ಎಸ್.ಆರ್, ಉದಯ, ವಾಸು ಕೆ, ಹೊನ್ನಯ್ಯ ಮತ್ತಿತರರು ಉಪಸ್ಥಿತರಿದ್ದರು.




