ಕೈಕಂಬ:ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಬಡಗಬೆಳ್ಳೂರು ,ಕೊಳತ್ತಮಜಲು ಇಲ್ಲಿಯ ಬ್ರಹ್ಮಶ್ರೀನಾರಾಯಣ ಗುರು ಮಂದಿರದಲ್ಲಿ 161 ನೇ ಜಯಂತಿ ಆಚರಣೆಯು ಆ.29 ರಂದು ಶನಿವಾರ ಆಚರಿಸಲಾಗುವುದು. ಶನಿವಾರ ಬೆಳಗ್ಗೆ 6ರಿಂದ 7 ರವರೆಗೆ ಗಣಹೋಮ ಬೆಳಗ್ಗೆ 8 ಗಂಟೆಯಿಂದ ಮರುದಿನ ಆ.30ರವವರೆಗೆ 24 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮವು ಜರಗಲಿದೆ. ಬೆಳಗ್ಗೆ 9ರಿಂದ 10 ರವರೆಗೆ ಕಲಶಾಭಿಷೇಕ ಮಧ್ಯಾಹ್ನ 12 ಕ್ಕೆ ಮಹಾಪೂಜೆ. 12.30ಕ್ಕೆ ಪಂಚಗ್ರಾಮದ ಬಿಲ್ಲವ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ 1ರಿಂದ ಅನ್ನ ಸಂತರ್ಪನೆ ಜರಗಲಿದೆ.ಎಂದು ಪಂಚ ಗ್ರಾಮದ ಬಿಲ್ಲವ ಸಂಘದ ಪ್ರಕಟನೆ ತಿಳಿಸಿದೆ.
