ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ಗಂಟಾಲ್ಕಟ್ಟೆಯಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ಸಂಜೆ ದಾಳಿ ನಡೆಸಿದ್ದು, ಈ ಸಂದರ್ಭ ಇತ್ತಂಡಗಳ ಘರ್ಷನೆ ಉಂಟಾಗಿದ್ದು, ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಖಚಿತ ಮಾಹಿತಿಯನ್ನು ಪಡೆದ ಮೂಡುಬಿದಿರೆಯ ಹಿಂದೂ ಸಂಘಟನೆ ಕಾರ್ಯಕರ್ತರರು ಗಂಟಾಲ್ಕಟ್ಟೆ ಜಂಕ್ಷನ್ನಲ್ಲಿ ಹಾಡಿಯೊಂದರಲಿ ಕಟ್ಟಿ ಹಾಕಲಾದ ಜಾನುವಾರುಗಳಿರುವ ಸ್ಥಳಕ್ಕೆ ದಾಳಿ ನಡೆಸಿದರು. ಇನ್ನೊಂದು ಕೋಮಿನ ಯುವಕರ ತಂಡವೊಂದು ಇದನ್ನು ಪ್ರತಿಭಟಿಸಿದ್ದು, ಇತ್ತಂಡಗಳ ನಡುವೆ ಮಾತಿನ ಚಕಾಮಕಿ ನಡೆಯಿತು. ಕೈ-ಕೈ ಮಿಲಾಯಿಸಿದರು. ಸ್ಥಳಕ್ಕೆ ಬಂದ 4 ಜನ ಪೊಲೀಸರು ತಂಡಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕೆಲ ಹೊತ್ತು ಉಧ್ವಿಗ್ನ ವಾತಾವರಣವೇ ಮುಂದುವರೆಯಿತು. ಆ ಬಳಿಕ ತಂಡಗಳನ್ನು ನಿಯಂತ್ರಿಸಲು ಪೊಲೀಸರು ಸಫಲರಾದರು.
..
ಜಿಪ್ ಬಿಚ್ಚಿ ಅನುಚಿತ ವರ್ತನೆ:
ಗಲಾಟೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಟಿ.ವಿ ವರದಿಗಾರರನ್ನು ನೋಡಿದ ವ್ಯಕ್ತಿಯೊಬ್ಬ, ಅದನ್ನು ಏನು ತೆಗೆತ್ತಿದ್ದೀರಿ, ಇದನ್ನು ತೆಗೆಯಿರಿ ಎಂದು ಪ್ಯಾಂಟ್ ಜಿಪ್ ತೆಗೆದಿದ್ದಾನೆ. ಮಾಧ್ಯಮದವರೆಂದು ಗಮನಿಸಿದ ಮತ್ತೊಬ್ಬ ಅವನನ್ನು ಅಲ್ಲಿಂದ ಕಳುಹಿಸಿದ್ದಾನೆ.




