ಸುದ್ದಿ9 ಬಿಸಿರೋಡ್: ಬಂಟ್ವಾಳ ತಾಲೂಕಿನ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕರಾದ ರೋನ್ಸ್ ಬಂಟ್ವಾಳ ಇವರನ್ನು ಮೇ.18ರಂದು ಸೋಮವಾರ ಬಿ.ಸಿ.ರೋಡು ಪ್ರೆಸ್ ಕ್ಲಬ್ನಲ್ಲಿ ಅಭಿನಂದಿಸಲಾಗುವುದು.

ಅಧ್ಯಕ್ಷತೆಯನ್ನು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ವಹಿಸಲಿದ್ದಾರೆ. ಮಂಗಳೂರು ಆಕಾಶವಾಣಿ ಸಹಾಯಕ ನಿಲಯ ನಿರ್ದೇಶಕ ಡಾ|ವಸಂತ್ ಕುಮಾರ್ ಪೆರ್ಲ ಅಭಿನಂದಿಸಲಿದ್ದಾರೆ. ಅಭಿನಂದನೆಯನ್ನು ಪತ್ರಕರ್ತ ಗೋಪಾಲ ಅಂಚನ್ ವಾಚಿಸಲಿದ್ದಾರೆ ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಕಾರ್ಯಕರ್ತರ ಪತ್ರಕರ್ತರ ಸಂಘ ಮಂಗಳೂರು ಶ್ರೀನಿವಾಸ ನಾಯಕ್ ಇಂದಾಜೆ ಆಗಮಿಸಲಿದ್ದಾರೆ. ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟನೆ ತಿಳಿಸಿದೆ.
