ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಆಗಿರುವುದರಿಂದ ದೇಶ ವಿದೇಶಗಳಿಗೆ ವಿಮಾನಯಾನ ಸೇವೆ ಹೆಚ್ಚಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಣಪತಿರಾಜು ಅವರನ್ನು ಭೇಟಿ ಮಾಡಿದ ಸಚಿವರು, ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚಿನ ವಿಮಾನ ಸಂಚಾರದ ಬೇಡಿಕೆ ಇದೆ. ವಿಶೇಷವಾಗಿ ಸೌದಿ ಅರೇಬಿಯಾದ ರಿಯಾದ್ ಮತ್ತು ಜಿದ್ದಾ ನಗರಕ್ಕೆ ಮಂಗಳೂರಿನಿಂದ ನೇರ ವಿಮಾನ ಸಂಚಾರಕ್ಕೆ ಅತೀವ ಒತ್ತಡ ಇದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು. ಮಂಗಳೂರಿನಿಂದ ಖಾಸಗಿ ವಿಮಾನ ಸಂಸ್ಥೆಗಳಿಗೂ ವಿಮಾನ ಹಾರಾಟಕ್ಕೆ ಹೆಚ್ಚು ಅವಕಾಶ ನೀಡಬೇಕು. ವಿಮಾನದಲ್ಲಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸಬೇಕು. ಕಸ್ಟಮ್ಸ್, ‘ದ್ರತೆ ಸೇವೆ ಉತ್ತಮವಾಗಿದ್ದರೂ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು.

ಸಚಿವ ಖಾದರ್ ಮನವಿಗೆ ಸ್ಪಂದಿಸಿದ ಕೇಂದ್ರ ನಾಗರಿಕ ವಿಮಾನ ಯಾನ ಸಚಿವರು, ಮಂಗಳೂರು ವಿಮಾನ ನಿಲ್ದಾಣದಿಂದ ಇನ್ನಷ್ಟು ಸಂಚಾರ ಆರಂಭಿಸಲು ಖಾಸಗಿ ವಿಮಾನ ಸಂಸ್ಥೆಗಳು ಮುಂದೆ ಬಂದರೆ, ಖಂಡಿತಾ ಅವಕಾಶ ನೀಡಲಾಗುವುದು. ರಾಜ್ಯ ಸರಕಾರ ಭೂಮಿ ಹಸ್ತಾಂತರಿಸಿದರೆ, ರನ್ವೇ ವಿಸ್ತರಣೆ ಕಾಮಗಾರಿ ಶೀಘ್ರವಾಗಿ ಕೈಗೆತ್ತಿಕೊಳ್ಳುವುದಾಗಿ ‘ಭರವಸೆ ನೀಡಿದರು. ಸಚಿವ ಯು.ಟಿ.ಖಾದರ್ ಅವರೊಂದಿಗೆ ಅಮೆಕೊ ಸಂಸ್ಥೆ ಸಿಇಒ ಆಸಿಫ್ ಇದ್ದರು.
