ಮಂಗಳೂರು: ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಮಂಗಳೂರಿನ ಬಿಜೈ ಮ್ಯೂಸಿಯಂ ಸಮೀಪ ಸಂಭವಿಸಿದೆ. ಬಾಲಕಿ ಮನೆಯ ಪಕ್ಕ ಆಟವಾಡುತ್ತಿದ್ದು, ಈ ವೇಳೆ ಕಾಲುಜಾರಿ ಪಾಳುಬಾವಿಗೆ ಬಿದ್ದಳು ಎನ್ನಲಾಗುತ್ತಿದೆ.
ಮೃತ ಬಾಲಕಿಯನ್ನು ಬಾದಾಮಿ ತಾಲೂಕಿನ ಲಿಂಗಾಪುರ್ ಗ್ರಾಮದ ಪರಸಪ್ಪ-ಶಾಂತಾಬಾಯಿ ಪುತ್ರಿ ಸವಿತಾ ಎಂದು ಗರುತಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದು ಬಾಲಕಿಯ ಪ್ರಾಣ ಉಳಿಸಲು ಕಾಯರ್ಾಚರಣೆ ಕೈಗೊಂಡಿದ್ದಾರೆ.ಬಾಲಕಿ ಯಾವುದೇ ರೀತಿಯಲ್ಲಿ ಪ್ರತಿಸ್ಪಂದಿಸದೇ ಇರುವ ಕಾರಣ ಹೆತ್ತವರು ಬಾವಿಕಟ್ಟೆಯಲ್ಲಿ ರೋಧಿಸುತ್ತಿದ್ದಾರೆ.



