ಗುರುಪುರ : ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಒದಗಿಸಿದ ತುಳುನಾಡ ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳು ಮತ್ತು ಸಾಹಿತಿಗಳ ಇತಿಹಾಸ ಒಳಗೊಂಡ ನೂರಕ್ಕೂ ಅಧಿಕ ಪುಸ್ತಕಗಳನ್ನು ಮಳಲಿಯ ಸಂಯುಕ್ತ ಪ್ರೌಢಶಾಲೆಗೆ ಅ. ೧೪ರಂದು ಹಸ್ತಾಂತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಪ್ರಭಾ, ಹಿರಿಯ ಶಿಕ್ಷಕ ಮಹೇಶ್ ಹಾಗೂ ಶಾಲಾ ಮಕ್ಕಳ ಉಪಸ್ಥಿತಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಅವರು ಶಾಲೆಗೆ ಪುಸ್ತಕ ಹಸ್ತಾಂತರಿಸಿ, ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
