
ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಭಟ್ರಕೋಡಿ ಎಂಬಲ್ಲಿ 10 ಲ.ರೂ.ವೆಚ್ಚದಲ್ಲಿ ನಿರ್ಮಾವಾದ ಕಾಂಕ್ರಿಟೀಕೃತ ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಡಗಬೆಳ್ಳೂರು ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ ಅಜಿನಡ್ಕ, ಪಂಚಾಯತ್ ಸದಸ್ಯ ರಘುವೀರ್ ಗರ್ಗಲ್, ಬಂಟ್ವಾಳ ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತೆಂಕ ಬೆಳ್ಳೂರು ಬಿಜೆಪಿ ಸಂಚಾಲಕರಾದ ಮುರಳಿಧರ್ ಶೆಟ್ಟಿ, ಹಿರಿಯರಾದ ವಾಮನ ಸಪಲ್ಯ ಹೆಬ್ಬಾರ ಬೆಟ್ಟು, ಪದ್ಮನಾಭ ಸಪಲ್ಯ, ತಿಮ್ಮಪ್ಪ ಬೆಳ್ಚಡ, ಅಶೋಕ್ ದೇವಾಡಿಗ, ನಾಗಶ್ರೀ ಸಂಘ ಅಧ್ಯಕ್ಷರಾದ ರಾಮದಾಸ್ ಕಮ್ಮಾಜೆ, ದಿವಾಕರ್ ಕಾಗುಡ್ಡೆ, ಬಿಜೆಪಿ ಕಾರ್ಯಕರ್ತರಾದ ತಿಮ್ಮಪ್ಪ ಕಮ್ಮಾಜೆ, ತಿರುಲೇಶ್ ಬೆಳ್ಳೂರು, ತಿರುಮಲೇಶ್ ಬೆಳ್ಳೂರು, ದಿವಾಕರ ನಾಯ್ಕ್ ಕಾಗುಡ್ಡೆ, ತಿಮ್ಮಪ್ಪ ಕುಲಾಲ್, ಗಂಗಾಧರ ಕಾಗುಡ್ಡೆ, ಮತ್ತಿತರರು ಉಪಸ್ಥಿತರಿದ್ದರು.
