ಬೆಳ್ಳೂರು ಜಾರಪ್ಪ ಪೂಜಾರಿ ನಿಧನ
ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಪ್ಪಳ ಜಾರಪ್ಪ ಪೂಜಾರಿ( 88) ಅಲ್ಪ ಕಾಲದ ಆಸೌಖ್ಯದಿಂದ ನವೆಂಬರ್ 29 ರಂದು ಶನಿವಾರ ಕೊಪ್ಪಳ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಭಾರತ್ ಬ್ಯಾಂಕ್ ನಿರ್ಧೇಶಕ, ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಅಧ್ಯಕ್ಷರಾದ ಗಂಗಾಧರ ಜೆ ಪೂಜಾರಿ ಸಹಿತ ನಾಲ್ವರು ಪುತ್ರರನ್ನು ಮೂವರು ಪುತ್ರಿಯರನ್ನು ಹಾಗೂ ಅಳಿಯಂದಿರು , ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಮತ್ತು ಬಂದು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಭಾನುವಾರ ಬೆಳಗ್ಗೆ 11 ಗಂಟೆಗೆ ಕೊಪ್ಪಳದಲ್ಲಿ ಜರಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.



