ಕರಾಟೆ: ಚಿನ್ನದಪದಕ
ಬಂಟ್ವಾಳ: ಶೋರಿನ್- ರಿಯು ಕರಾಟೆ ಅಸೋಸಿಯೇಶನ್ (ರಿ).ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಎಂ.ಕೆ.ಅನಂತರಾಜು ಕಾಲೇಜ್ ಆಫ್ ಪಿಸಿಕಲ್ ಏಜುಕೇಶನ್ ಮೂಡಬಿದ್ರೆ ಇಲ್ಲಿ ಅ. ೨೫ ರಂದು ನಡೆದ 8 ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಶಮಿರಾಜ್ ಆಳ್ವ ಚಿನ್ನದ ಪದಕ ಪಡೆದು ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಈತ ಪೆರ್ನೆ ದುರ್ಗಿಪಾಲ್ ಪ್ರಮೋದ್ ಆಳ್ವ ಮತ್ತು ಕುಸುಮಾವತಿ ಪುತ್ರನಾಗಿದ್ದಾನೆ.ಪ್ರಸ್ತುತ ಈತ ಸೆನ್ಸಾಯಿ ಮೋಹನ್ ಪೂಜಾರಿಅವರಿಂದ ತರಬೇತಿ ಪಡೆಯುತ್ತಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ



