ಹಿಂದೂ ರುದ್ರಭೂಮಿಯ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬಂಟ್ವಾಳ: ತುಂಬೆ ಗ್ಗ್ರಾಮ ಪಂಚಾಯತಿಯತುಂಬೆಯ ಮುಳಿಪಡ್ಪು ಎಂಬಲ್ಲಿ3.60 ಲಕ್ಷ ರೂ.ವೆಚ್ಚದಲ್ಲಿ ಹಿಂದೂ ರುದ್ರಭೂಮಿ ಬಳಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ ಸಾಲಿಯಾನ್ ತುಂಬೆ, ಸದಸ್ಯರಾದ ಹೇಮಲತಾ ಜಿ ಪೂಜಾರಿ, ಸಂಜಿತ್ ಪೂಜಾರಿ, ಅಶೋಕ್ ಕೊಟ್ಟಿಂಜ, ಗುತ್ತಿಗೆದಾರ ಪ್ರಶಾಂತ್ ಕೊಟ್ಟಾರಿ,ತಿಮಪ್ಪ ಬೆಳ್ಚಡ ಮತ್ತಿತರರಿದ್ದರು.



