ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ನೂತನ ಮಹಿಳಾ ವಿಭಾಗದ ಸಭೆಯು ಬೆಳ್ಳೂರು ಬಂಟರ ವಲಯದ ಅಧ್ಯಕ್ಷರಾದ ರಾಧಕೃಷ್ಣ ರೈ ಪೊಳಲಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸವಿತಾ ಎಸ್ ಗಾಂಭೀರ್ ಕೂರಿಯಾಳ ಸರ್ವಾನುಮತದಿಂದ ಆಯ್ಕೆಯಾದರು.

ಗೌರವ ಅಧ್ಯಕ್ಷರಾಗಿ ಮಂಜುಳಾ ಶೆಟ್ಟಿ ಮಜ್ಜಿಬೈಲು, ಬಡಗಬೆಳ್ಳೂರು ಉಪಾಧ್ಯಕ್ಷರಾಗಿ ಸುಶ್ಮಿತಾ ಶೆಟ್ಟಿ ತಂಕಿಹಿತ್ಲು ಕಾರ್ಯದರ್ಶಿ ಶೀತಲ್ ಶೆಟ್ಟಿ ಕನ್ಯಾಬೆಟ್ಟು ಕೋಶಾಧಿಕಾರಿಯಾಗಿ ಶಾಂತಿ ಶೆಟ್ಟಿ ಪಲ್ಲಿಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾ ಶೆಟ್ಟಿ ಕನ್ಯಾಬೆಟ್ಟು ಮಮತಾ ಶೆಟ್ಟಿ ಕೂರಿಯಾಳ ಪಡು, ಸಂಘಟನಾ ಕಾರ್ಯದರ್ಶಿ ಪವಿತ್ರ ಪಿ. ಶೆಟ್ಟಿ ಅಮ್ಮುಂಜೆ, ಪ್ರಮೀಳಾ ಡಿ. ಮಾರ್ಲ ಪುಂಚಮೆ. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೇಯಾ ಎಸ್

ಸಭೆಯಲ್ಲಿ ಬೆಳ್ಳೂರು ವಲಯ ಬಂಟರ ಸಂಘದ ಗೌರವ ಅಧ್ಯಕ್ಷರಾದ ಮುಂಡಡ್ಕ ಗುತ್ತು ಯಜಮಾನ್ ರತ್ನಾಕರ ಶೆಟ್ಟಿ, ಅಧ್ಯಕ್ಷರಾದ ರಾಧಕೃಷ್ಣ ರೈ ಪೊಳಲಿ, ಬೆಳ್ಳೂರು ಗುತ್ತು ಕೃಷ್ಣ ಪ್ರಸಾದ್ ರೈ ಹಾಗೂ ಸಮಿತಿ ಸದಸ್ಯರು ಉಪಸ್ಥಿತಿರಿದ್ದರು. ಪುಷ್ಪರಾಜ್ ಶೆಟ್ಟಿ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು
