ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸುಹಾಶ್ ಶೆಟ್ಟಿ ಹತ್ಯೆಯ ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ಒಪ್ಪಿಸಲು ಪಟ್ಟು ಹಿಡಿದು ಬಜಪೆಯಲ್ಲಿ ಪ್ರತಿಭಟನೆ ನಡೆಸಿ ದ್ದರು.
ಇದರ ಸ್ವಲ್ಪ ಸಮಯದಲ್ಲೆ ಬಂಟ್ವಾಳ ಸಮೀಪದ ಕೊಳತ್ತಮಜಲು ಯುವಕ ಅಬ್ದುಲ್ ರೆಹ್ಮಾನ್ ನನ್ನು ದೀಪಕ್ ಎಂಬಾತ ಮನೆಗೆ ಹೊಯ್ಗೆ ಹಾಕಿಸುವ ನೆಪದಲ್ಲಿ ಇವರ ತಂಡ ಕೊಚ್ಚಿ ಬಬರವಾಗಿ ಹತ್ಯೆ ಮಾಡಿತ್ತು ಸುಹಾಶ್ ಶೆಟ್ಟಿ ಪ್ರಕರಣದ ಸಂಬಂಧ ಈಗಾಗಲೇ ಪೋಲೀಸರು 11 ಮಂದಿಯನ್ನು ಬಂದಿಸಿದ್ದು ಮತ್ತು ಅಬ್ದುಲ್ ರೆಹ್ಮಾನ್ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ
