ಬಂಟ್ವಾಳ: ಕಾಂಗ್ರೆಸ್ ಮುಖಂಡ ,ವಿಧಾನಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ನೇತೃತ್ವದ ತಂಡ ಮೇ.27 ರಂದು ಬಂಟ್ವಾಳ ತಾ.ನ ಇರಾಕೋಡಿಯಲ್ಲಿ ಹತ್ಯೆಯಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಗುರುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ ಘಟನೆಯ ಬಗ್ಗೆಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಬೇಬಿಕುಂದರ್ ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಚಂದ್ರಶೇಖರ ಭಂಡಾರಿ,ಉಪ್ಪಿನಂಗಡೊ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ,ಮಾಜಿಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಸಾಹುಲ್ ಹಮೀದ್ ,ಎಂ.ಎ.ಗಫೂರ್ , ಪಕ್ಷದ ಮುಖಂಡರಾದ ಅಬ್ಬಾಸ್ ಆಲಿ,ಉಲ್ಲಾಸ್ ಶೆಟ್ಟಿ,ಡಾ.ರಾಜಾರಾಮ್,ಸುರೇಶ್ ಜೋರ,ಲುಕ್ಮಾನ್ ಬಂಟ್ವಾಳ ,ಚಿತ್ತರಂಜನ್ ಶೆಟ್ಟಿ ಹಾಗೂ ಸ್ತ್ಥಳೀಯ ಪ್ರಮುಖರಿದ್ದರು.
