ಪುತ್ತೂರು: ಪುತ್ತೂರು ಮಾದರಿಯ ‘ಸ್ವಚ್ಛ ಸಂಸ್ಕೃತಿ’ ಜಿಲ್ಲಾದ್ಯಂತ ಅಡಿಗಲ್ಲು

ಪುತ್ತೂರು ಸ್ವಚ್ಛತಾ ಕಾರ್ಯಕ್ರಮ ಈಗ ಜಿಲ್ಲೆಗೆ ಮಾದರಿಯಾಗಿದೆ. ಹೌದು ಅಧಿಕಾರಿಗಳು ಎಂಬ ಅಹಂಕಾರ ಇಲ್ಲದೆ, ನಮ್ಮ ತಾಲೂಕು ಸ್ವಚ್ಛವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳು ಬೆಳಿಗ್ಗೆ ಎದ್ದು ಕೈಗೆ ಗ್ಲೌಸ್ ಹಾಕಿಕೊಂಡು ಪ್ರತಿ ಬೀದಿ ಬೀದಿಗೆ ಹೋಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದರು. ಇಲ್ಲಿಯ ಅಧಿಕಾರಿಗಳ ಬಾಯಿಯಲ್ಲಿ ಇದ್ದ ಮಂತ್ರ ಒಂದೇ ನಮ್ಮ ಸಂಸ್ಕೃತಿ-ಸಚ್ಛ ಸಂಸ್ಕೃತಿ. ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಪರಿಕಲ್ಪನೆಯಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಸ್ವಚ್ಛತಾ ಅಭಿಯಾನ ಇದೀಗ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ತಾಲೂಕುಗಳ ಆಡಳಿತಕ್ಕೂ ಇದನ್ನು ಪಾಲಿಸಲಾಗಿದೆ.