ಯುವಶಕ್ತಿ ಸೇವಾಪಥ ಮೂರನೇ ವರ್ಷದ ಸಂಭ್ರಮ
ಬಂಟ್ವಾಳ : ಮಿತ್ರಸಂಸ್ಥೆ ಯುವಶಕ್ತಿ ದುರ್ಗಾಪುರ ನೇತೃತ್ವದಲ್ಲಿ ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡದ ಮೂರನೇ ವರ್ಷದ ಯುವಸೇವಾಸಂಭ್ರಮ ಕಾರ್ಯಕ್ರಮ ಕಿನ್ಯಾದ ದುರ್ಗಾಪುರ ಯಕ್ಷಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಿನ್ಯಾ ಬೆಳರಿಂಗ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನ ಭಂಡಾರ ಮನೆ ಇದರ ಆಡಳಿತ ಮೊಕ್ತೇಸರರಾದ ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಿದ್ದರು.ಶ್ರೀ ಕ್ಷೇತ್ರ ಉದ್ಯಾವರ ಮಾಡಶ್ರೀ ರಾಜ ಬೆಳ್ಚಪ್ಪಾಡ ಅಣ್ಣ ದೈವ ಪಾತ್ರಿ ಕಾರ್ಯಕ್ರಮ ಉದ್ಘಾಟಿಸಿದರು.

ತೊಕ್ಕೊಟ್ಟುಅಂಬಾವನ ಧರ್ಮ ಶಿಕ್ಷಣ ಕೇಂದ್ರ ಪ್ರಧಾನ ಸಂಚಾಲಕರಾದ ಡಾ.ಅರುಣ್ ಉಳ್ಳಾಲ್ ಪ್ರಧಾನ ಭಾಷಣಗೈದು ಕೇವಲ 3 ವರ್ಷಗಳಲ್ಲಿ ಸಮಾಜಕ್ಕೆ ಒಂದು ಕೋಟಿಗೂ ಹೆಚ್ಚು ಸಮಾಜಕ್ಕೆ ಅರ್ಪಿಸಿದ ಸೇವಾ ಪಥದ ಕಾರ್ಯ ಅಭಿನಂದನದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಜಯಪ್ರಕಾಶ್ ತಲಪಾಡಿ, ನಾರಾಯಣ ಕುಂಪಲ, ವಿಜಯಕುಮಾರ್ ರೈ ಕುಂಬ್ಳೆರವರನ್ನು ಸನ್ಮಾನಿಸಲಾಯಿತು. ಸೇವಾಸಂಸ್ಥೆಗಳನ್ನು ಹಾಗೂ ಮಿತ್ರ ಸಂಸ್ಥೆಗಳನ್ನು ಗೌರವಿಸಲಾಯಿತು. ಅದೇರೀತಿ 20 ಫಲಾನುಭವಿಗಳಿಗೆ 5 ಲಕ್ಷ ರೂ ಸೇವಾನಿಧಿ ಹಸ್ತಾಂತರಿಸಲಾಯಿತು. ಕಾರ್ಯಕರ್ತ ಕ್ಷೇಮನಿಧಿಗೆ 49 ಸಾ.ರೂ. ಸಮರ್ಪಿಸಲಾಯಿತು.
ಅಂಬುಲೆನ್ಸ್ ಲೋಕಾರ್ಪಣೆ:
ಇದೇ ವೇಳೆ ಯುವಶಕ್ತಿ ಕಾರ್ಯಕರ್ತ ರಘು ಎಕ್ಕೂರುರವರ “ಧನಶ್ರೀ ಆಂಬುಲೆನ್ಸ್ ” ನ್ನು ಲೋಕಾರ್ಪಣೆ ಮಾಡಲಾಯಿತು .
ಕಿನ್ಯಾ ದುರ್ಗಾಪುರ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ (ರಿ.) ಅಧ್ಯಕ್ಷರಾದ ಮೋಹನ್ ದಾಸ್ ಎ, ಡಾ.ದಿವ್ಯಾ ಶೆಟ್ಟಿ ಮಂಗಳೂರು, ಫ್ರೆಂಡ್ಸ್ ಕೊಲ್ಯದ ಸ್ಥಾಪಕಾಧ್ಯಕ್ಷ ಅಶ್ವಿನ್ ಕೊಲ್ಯ, ಯುವಶಕ್ತಿ ರಕ್ತನಿಧಿ ಇದರ ದಯಾನಂದ ಭಟ್ ಕಾಸರಗೋಡು, ಯುವಶಕ್ತಿ ದುರ್ಗಾಪುರದ ಪ್ರಮುಖರಾದ ಪಾರ್ಥಸಾರಥಿ ಕಿನ್ಯಾ, ಯುವಶಕ್ತಿ ಕಡೇಶಿವಾಲಯ( ರಿ) ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ, ಯುವಶಕ್ತಿ ಸೇವಾ ಪಥದ ಪ್ರಮುಖರಾದ ಜಯರಾಜ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಮೇಶ್ ಆಳ್ವ ದೇವೀಪುರ ಸ್ವಾಗತಿಸಿ ರಾಜೇಂದ್ರ ಶೆಟ್ಟಿ ತಟ್ಟಾಜೆ ವಂದಿಸಿದರು. ದುರ್ಗಾಪ್ರಸಾದ್ ಅಮೈ ಹಾಗೂ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಫೆ.15 ರಂದು ಶಾಲೆಗೆ ಕೊಠಡಿ ಹಸ್ತಾಂತರ
ಯುವಶಕ್ತಿ ತಂಡದಿಂದ ಇಲ್ಲಿಯವರೆಗೆ 1. 18 ಕೋ. ರೂ.ವನ್ನು ಸಮಾಜಕ್ಕೆ ಸಮರ್ಪಣೆಯಾಗಿದ್ದು ಯುವಶಕ್ತಿ ರಕ್ತನಿಧಿಯ ಮೂಲಕ 15,000+ ಯುನಿಟ್ ರಕ್ತ ಆಸ್ಪತ್ರೆಗಳಿಗೆ ಪೂರೈಕೆಯಾಗಿದೆ.
ಈ ಸಂಭ್ರಮದ ಸಲುವಾಗಿ “ಸಂತೃಪ್ತಿ” ಹೆಸರಿನಿಂದ ಕಡೇಶಿವಾಲಯ ಪ್ರಾಥಮಿಕ ಶಾಲೆಗೆ ಕೊಠಡಿಗಳನ್ನು ನಿರ್ಮಿಸಲಾಗಿದ್ದು,ಫೆ. 15 ರಂದು ಶಾಲೆಗೆ ಹಸ್ತಾಂತರ ಜೊತೆಗೆ ರಕ್ತದಾನ ಶಿಬಿರ ಹಾಗೂ ಸಂಜೆ ಸಭೆ,ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.