ಬಂಟ್ವಾಳ: ಇಲ್ಲಿನ ಕನಪಾದೆ ಶ್ರೀ ಸತ್ಯ ದೇವತೆ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಇಲ್ಲಿನ ಸುಮಾರು 100 ಮನೆಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪದ್ಮನಾಭ ಸಂಚಯಗಿರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರೂಪಾ ಜೆ, ಗ್ರಾಮ ಪಂಚಾಯಿತಿ ಸದಸ್ಯರಾದ ಜನಾರ್ದನ, ಸಂಘದ ಅಧ್ಯಕ್ಷರಾದ ಸದಾನಂದ ಹಳೇಗೇಟು, ಕಾರ್ಯದರ್ಶಿ ಧನಂಜಯ, ಕಾರ್ತಿಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು
