Published On: Wed, Oct 23rd, 2024

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಶಂಭೂರು ಘಟಕದ ಮಾಸಿಕ ಸಭೆ ಹಾಗೂ ಶ್ರಮದಾನ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಶಂಬೂರು ಘಟಕದ ಮಾಸಿಕ ಸಭೆ ಹಾಗೂ ಶ್ರಮದಾನವು ನಡೆಯಿತು.ಮಾಸಿಕ ಸಭೆಯು ಶಂಭೂರು ಗ್ರಾಮದ ಬೈಪಾಡಿ ಕೃಷ್ಣಪ್ಪ ನಾಯ್ಕರವರ ಮನೆಯಲ್ಲಿ ವಲಯ ಮೇಲ್ವಿಚಾರಕಿ ಅಮಿತಾ ರವರ ಉಪಸ್ಥಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಘಟಕದ ಜವಾಬ್ದಾರಿಯ ಬಗ್ಗೆ ಮೇಲ್ವಿಚಾರಕರು ಮಾಹಿತಿ ನೀಡಿದರು.

ಆ ಬಳಿಕ ಘಟಕದ ಸದಸ್ಯರು ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿ ಗುರಿಯಿಂದ ನಾಟಿಯವರಿಗೆ ಮಾರ್ಗದ ಬದಿಯಲ್ಲಿ ಬೆಳೆದ ಗಿಡ ಗಳನ್ನು ಕಡಿದು ಸ್ವಚ್ಛತೆಯನ್ನು ಮಾಡಲಾಯಿತು.
ಘಟಕದ ಸದಸ್ಯರ ಶ್ರಮದಾನದ ವೇಳೆಯಲ್ಲಿ ಜನಜಾಗೃತಿ ವಲಯ ಸದಸ್ಯರಾದ ಪುರುಷೋತ್ತಮ್, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ಎಂ ಮಡಿಮುಗೇರು, ಘಟಕದ ಪ್ರತಿನಿಧಿ ಕೃಷ್ಣಪ್ಪ ನಾಯ್ಕ್,ಸಂಯೋಜಕಿ ಲಕ್ಷ್ಮೀ, ಘಟಕದ ಸದಸ್ಯರುಗಳಾದ ವಾಮನ, ಸುರೇಶ್, ಹರೀಶ್, ಪ್ರಕಾಶ್, ಸನತ್, ಶಿವಶಂಕರ್, ಪ್ರೇಮಲತಾ, ಬಬಿತ, ಅಕ್ಕಮ್ಮ, ಗೀತಾ, ಶ್ರೀಮತಿ, ಪುರುಷೋತ್ತಮ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter