ಕಲ್ಲಡ್ಕ ಶ್ರೀರಾಮ ಹಿ. ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ: ತಾಲೂಕು ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಬಾಳ್ತಿಲ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ೧೩ ಪ್ರಥಮ, ೩ ದ್ವಿತೀಯ ಹಾಗೂ ೪ ತೃತೀಯ ಒಟ್ಟು ೨೦ ಬಹುಮಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಿರಿಯ ವಿಭಾಗದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ೪ನೇ ತರಗತಿಯ ಗೌರಿ ನಂದಿನಿ, ಭಕ್ತಿಗೀತೆ ಸ್ಪರ್ಧೆಯಲ್ಲಿ ೩ನೇ ತರಗತಿಯ ಮಾಯಾಲಕ್ಷ್ಮೀ, ಚಿತ್ರಕಲೆಯಲ್ಲಿ ೪ನೇ ತರಗತಿಯ ನಿಹಾರಿಕ, ಛದ್ಮವೇಷ ಸ್ಪರ್ಧೆಯಲ್ಲಿ ೩ನೇ ತರಗತಿಯ ತನ್ವಿ, ದೇಶಭಕ್ತಿಗೀತೆಯಲ್ಲಿ ೪ನೇ ತರಗತಿಯ ಶ್ರಾವಣಿದೀಪ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇಂಗ್ಲೀಷ್ ಕಂಠಪಾಠದಲ್ಲಿ ೪ನೇ ತರಗತಿಯ ವಿಹಾನ್, ಕಥೆ ಹೇಳುವುದು ೪ನೇ ತರಗತಿಯ ಬ್ರಾಹ್ಮೀಕೃಪಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಧಾರ್ಮಿಕ ಪಠಣ ಸಂಸ್ಕೃತದಲ್ಲಿ ೪ನೇ ತರಗತಿಯ ಶ್ರಾವಣಿ ದೀಪ ಹಾಗೂ ಅಭಿನಯ ಗೀತೆಯಲ್ಲಿ ೪ನೇ ತರಗತಿಯ ಬ್ರಾಹ್ಮೀಕೃಪಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ೭ನೇ ತರಗತಿಯ ಚಿನ್ಮಯಿ ಎನ್ ಶೆಟ್ಟಿ, ಸಂಸ್ಕೃತ ಕಂಠಪಾಠದಲ್ಲಿ ೭ನೇ ತರಗತಿಯ ರಾಜೇಶ್ವರಿ ಭಟ್, ಧಾರ್ಮಿಕ ಪಠಣದಲ್ಲಿ ೬ನೇ ತರಗತಿಯ ಅಪ್ರಮೇಯ ತೋಳ್ಪಾಡಿ, ದೇಶಭಕ್ತಿಗೀತೆಯಲ್ಲಿ ೭ನೇ ತರಗತಿಯ ಮಾನಸ, ಕಥೆ ಹೇಳುವುದು ೭ನೇ ತರಗತಿಯ ೭ನೇ ತರಗತಿಯ ಶಾನ್ವಿ ಜೆ.ಕೆ ಅಂಚನ್, ಚಿತ್ರಕಲೆಯಲ್ಲಿ ೭ನೇ ತರಗತಿಯ ನಿನಾದ್ ಕೈರಂಗಳ, ಭಕ್ತಿಗೀತೆ ೬ನೇ ತರಗತಿಯ ಅಪ್ರಮೇಯ ತೋಳ್ಪಾಡಿ, ಆಶುಭಾಷಣದಲ್ಲಿ ೭ನೇ ತರಗತಿಯ ಬಿನಿತ್ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಬಂಧ ರಚನೆಯಲ್ಲಿ ೭ನೇ ತರಗತಿಯ ಶಾರ್ವಿಪಿ.ಎಲ್ ದ್ವಿತೀಯ ಸ್ಥಾನ, ಅಭಿನಯ ಗೀತೆಯಲ್ಲಿ ೭ನೇ ತರಗತಿಯ ವೈಷ್ಣವಿ ವೈ.ಕೆ., ಮಿಮಿಕ್ರಿಯಲ್ಲಿ ೫ನೇ ತರಗತಿಯ ಅನರ್ಘ್ಯ ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷರು, ಸಂಚಾಲಕರು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.