ಹಲಸು ಹಬ್ಬ ಮತ್ತು ವಿವಿಧ ಆಹಾರೋತ್ಪನ್ನಗಳ ಪ್ರಚಾರ ಪತ್ರ ಬಿಡುಗೆಡೆ
ಬಂಟ್ವಾಳ: ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ದಲ್ಲಿ ಆಗಸ್ಟ್ 3 ಮತ್ತು 4 ರಂದು ಏರ್ಪಡಿಸಲಾದ ಬಂಟ್ವಾಳ ಬೃಹತ್ ಹಲಸು ಹಬ್ಬ-ಹಣ್ಣುಗಳ ವಿವಿಧ ಆಹಾರೋತ್ಪನ್ನಗಳ ಮಹಾಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟದ ಪ್ರಚಾರ ಪತ್ರವನ್ನುರಾಜ್ಯ ಸಭಾ ಸದಸ್ಯರಾದ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನೇಶನಲ್ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಆದಿರಾಜ ಜೈನ್ ಮೇಳದ ಬಗ್ಗೆ ಪ್ರಸ್ತಾವನೆ ಗೈದರು.ಪದ್ಮಶೇಖರ ಜೈನ್ ,ಭರತ್ ಕುಮಾರ್ ಬಲ್ಲೋಡಿಗುತ್ತು,ಮಾಯಿಲಪ್ಪ ಸಾಲಿಯಾನ್,ಶ್ರೇಯಾಂಶ ಕುಮಾರ್,
ಮಾಣಿಕ್ಯ ರಾಜ್ ಜೈನ್,ಶಾಂತಿ ಪ್ರಸಾದ್ ಜೈನ್,ಸತೀಶ ಕುಮಾರ್ ಪಿಲಿಂಗಾಲು ಉಪಸ್ಥಿತರಿದ್ದರು.