ನರಹರಿಯಲ್ಲಿ ಭಜನಾ ಕಮ್ಮಟ
ಬಂಟ್ವಾಳ: ಇಲ್ಲಿನ ಬೊಂಡಾಲ ಶ್ರೀ ಕೋದಡರಾಮ ಭಜನಾ ಮಂದಿರ ನಿರ್ಮಾಣದ ಪ್ರಮುಖರಾದ ಭಾಸ್ಕರ ಮತ್ತು ಶ್ರೀಮತಿ ದುರ್ಗಾ ದಂಪತಿಗಳು ನರಹರಿ ಪರ್ವತದಲ್ಲಿ ಜರಗಿದ ಭಜನಾ ಕಮ್ಮಟ ಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ನರಹರಿ ಪರ್ವತದ ಪ್ರಮುಖರಾದ ಪ್ರಧಾನ ಆರ್ಚಕರಾದ ಪರಮೇಶ್ವರ ಮಯ್ಯ, ಡಾ.ಪ್ರಶಾಂತ್ ಮಾರ್ಲ, ಭಜನಾ ಸಂಯೋಜಕರಾದ ಶಂಕರ ಆಚಾರ್ಯ, ಮೆನೇಜರ್ ಆನಂದ್, ಜಗದೀಶ್ ರೆಂಗೇಲ್, ಪದ್ಮನಾಭ ಬೊಂಡಾಲ, ವಿಠಲ್ ಮೆಲ್ಕಾರ್, ವಸಂತ್, ನವೀನ್ ಹಾಗೂ ಎಂ. ಎನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.