Published On: Tue, Jun 4th, 2024

ಬಿಜೆಪಿ ಗೆಲುವು: ಬಂಟ್ವಾಳದಲ್ಲಿ ಕಾರ್ಯಕರ್ತರಿಂದ ಸಂಭ್ರಮ


ಬಂಟ್ವಾಳ:
ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಜೇಶ್ ಚೌಟ ಅವರ ಭರ್ಜರಿ ಗೆಲುವಿನ ಹಿನ್ನಲೆಯಲ್ಲಿ‌ ಬಂಟ್ವಾಳ‌ ಕ್ಷೇತ್ರದ ವಿವಿದೆಡೆಯಲ್ಲಿ‌  ಬಿಜೆಪಿ ಕಾರ್ಯಕರ್ತರು ವಿಜೋಯತ್ಸವ ಆಚರಿಸಿ ಸಂಭ್ರಮಿಸಿದರು.
ಚೌಟ ಅವರ ಗೆಲುವು ಪ್ರಕಟವಾಗುತ್ತಿದ್ದಂತೆ ಬಿ.ಸಿ.ರೋಡಿನ ಬಿಜೆಪಿ ಕಚೇರಿ ಮುಂಭಾಗದಲ್ಲಿ‌ ಬಿಜೆಪಿ‌ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ‌ ಹಂಚಿ‌ ಸಂಭ್ರಮಪಟ್ಟರು.ಶಾಸಕ ರಾಜೇಶ್ ನಾಯ್ಕ್ ಹಾಗೂ ಪಕ್ಷದ ಮುಖಂಡರು ಕೂಡ ಸಂಭ್ರಮದಲ್ಲಿ‌ಪಾಲ್ಗೊಂಡರು.


ಬಂಟ್ವಾಳದಲ್ಲು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.ಸಿದ್ದಕಟ್ಟೆ ಪೇಟೆಯಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಬಿಜೆಪಿ ,ನರೇಂದ್ರ ಮೋದಿ ಹಾಗೂ ಕ್ಯಾ.ಬ್ರಜೇಶ್ ಚೌಟ ಅವರ ಪರ ಘೋಷಣೆ ಕೂಗಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.


ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,ತಾ.ಪಂ.ಮಾಜಿ ಸದಸ್ಯರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಗ್ರಾ.ಪಂ. ಸದಸ್ಯರಾದ ಸುನೀಲ್ ಶೆಟ್ಟಿಗಾರ್, ಉದಯ ಪೂಜಾರಿ, ಸಿದ್ದಕಟ್ಟೆ ಸಹಕಾರಿ ಸಂಘದ  ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರೊಟ್ಟು, ಪ್ರಮುಖರಾದ ದೀಪಕ್ ಶೆಟ್ಟಿಗಾರ್, ಭೋಜ ಶೆಟ್ಟಿಗಾರ್,ನವೀನ್ ಹೆಗ್ಡೆ, ಹರಿಪ್ರಸಾದ್ ಆಚಾರ್ಯ,ಪುಷ್ಪರಾಜ್ ಶೆಟ್ಟಿ, ನಿತೇಶ್, ಗುಣಕರ,ಕಿಶೋರ್,ಬೂಬ, ಕೂಸ ಈ ಸಂದರ್ಭ ಮತ್ತಿತರರು ಉಪಸ್ಥಿತರಿದ್ದರು.


ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತ್ರಾದರೂ,ಕೇಂದ್ರದಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಬಿಜೆಪಿಗೆ ಸ್ಥಾನ ಲಭಿಸದಿರುವುದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೊಂಚ ಮಿರಾಸೆ ಮೂಡಿಸಿದೆ.


ದ.ಕ.ಜಿಲ್ಲೆಯಲ್ಲಿ‌ಕಾಂಗ್ರೆಸ್ ಸೋಲು‌ ಅನುಭವಿಸಿದ ಹಿನ್ನಲೆಯಲ್ಲಿ ಪಕ್ಷದ ನಾಯಕರು ಯಾರು‌ ಕಾಣಿಸಲಿಲ್ಲ ಆದರೆ ಐ. ಎನ್. ಡಿ .ಐ .ಎ ಪಕ್ಷ ಕೇಂದ್ರದಲ್ಲಿ 200 ರ ಗಡಿ ದಾಟಿರುವ ನಿಟ್ಟಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಸಂತಸ ಕಂಡುಬಂದಿತ್ತು.


ಮತ ಎಣಿಕೆಯ ಹಿನ್ನಲೆಯಲ್ಲಿ‌ ಸದಾ ಜನಸಂದಣಿಯಿಂದ ಗಿಜಿಗುಡುತ್ತಿದ್ದ ಬಿ.ಸಿ.ರೋಡು,ಬಂಟ್ವಾಳ ಸಹಿತ ವಿವಿಧ ನಗರ ಪ್ರದೇಶದಲ್ಲಿ‌ ಜನರ ಓಡಾಟ ವಿರಳವಾಗಿತ್ತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter